Wednesday, June 8, 2011

ಯಾರಿಗೆ ಶಿಕ್ಷೆ ಯಾರಿಗೋ ರಕ್ಷೆ


ಹಸಿರಿನ ಭೂತಾಯಿ ಮಡಿಲಲಿ
ಬೆಳೆದ ಋಣವ ಯೋಚಿಸದೆ
ಏಕೆ ಮಡಿಯಿಲ್ಲದ ಮನದಿ
ಇಳೆಯ ಅಳಿಸುವ ಯೋಚನೆ?
ಐಕ್ಯತೆಯ ಬಲದ ನೀತಿ ಅರಿಯದೆ
ಭಾ೦ದವ್ಯವ ಕಡೆಗಣಿಸಿ
ಏಕೆ ನಿನ್ನ ಶಕ್ತಿಯ ಮಿಥ್ಯ ಬಳೆಕೆಯ
ರಕುತದೋಕುಳಿಯ ಘರ್ಜನೆ?
ಮುಗ್ಧ ಮನಸಿನ ಮಗ್ನ ಚಿ೦ತೆಯ
ಅಸಹಾಯಕತೆಯ ಗಮನಿಸಿ
ಏಕೆ ಯಾರ ತಪ್ಪಿಗೆ ಯಾರನ್ನೋ ಶಿಕ್ಷಿಸುತ
ಬಡ ಹೃದಯಕೆ ರೋಧನೆ?
ಶಾ೦ತಿಮ೦ತ್ರದ ಸು೦ದರ ತ೦ತ್ರದ
ಸುವಿಚಾರವ ಅರಿಯದೆ
ಏಕೆ ಅರ್ಥವಿಲ್ಲದೆ ಸಿಗುತಿಹುದು
ಅನಾಚಾರಕೆ ರಕ್ಷಣೆ

No comments:

Post a Comment