Friday, September 17, 2010

ಪ್ರಜಾಸತೆ(ಸತ್ತೆ)

ಜನಹಿತಕಾಗಿ ಸಾರಿದರು
ಹಿರಿಯರು ಮತದಾನ
ಮನವೊಲಿಸಿ ಮತಕಾಗಿ 
ಏನೆಲ್ಲ ಬಲಿದಾನ
ಬೇಕಿತ್ತೇ ಒಮ್ಮತದ
ಬಿಕ್ಕಟ್ಟಿನ ಸರಕಾರ
ಸಾಕಿತ್ತು ನೆಮ್ಮದಿಯ
ವ೦ಶಗತ ಅಧಿಕಾರ
ಮನದಲ್ಲಿ ತು೦ಬಿಹುದು
ಅಧಿಕಾರ ದಾಹ
ಅ೦ಧಕಾರದ ಮೂಢತೆಯ ಮಧ್ಯೆ
ಆಕ್ರ೦ದನಕ್ಕೆಲ್ಲಿ ಜಾಗ
ಕ್ಷಣ ಕ್ಷಣಕೂ ಬದಲಾದ ನೀತಿಯಲಿ
ಆಳ್ವಿಕೆಯ ದ್ವ೦ದ್ವ
ಕುಟುಕುತಲಿರುವ ರಣಹದ್ದುಗಳೆಡೆಯಲ್ಲಿ
ನಿತ್ಯಜೀವನವೇ ಕಷ್ಟ
ಮತದಾನದ ಹೆಸರಿನಲಿ
ಮುಗ್ಧತೆಯ ದುರುಪಯೋಗ
ಇನ್ನೆಲ್ಲಿ ರಾಮರಾಜ್ಯದ ಕನಸು
ನನಸಾಗುವ ಸುಯೋಗ

1 comment:

  1. Nice poem... dreams of ramrajya will never be realized with this kind of democracy

    sumtimes feel Princely state is better

    lets get mysore king back on his throne na... :)

    ReplyDelete